ಶಿವಮೊಗ್ಗ, ಮಾ.17: ಆಕಾಶವಾಣಿ ಭದ್ರಾವತಿಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧ ಕಾಲೇಜುವಿದ್ಯಾರ್ಥಿಗಳು ಹಾಗೂ ಯುವಕ / ಯುವತಿಯರಿಂದ ವಸಂತೋತ್ಸವ ಯುವಕವಿ ಗೋಷ್ಠಿಗೆ ಕವನಗಳನ್ನುಆಹ್ವಾನಿಸಲಾಗಿದೆ.
ಕವನ ಕಳುಹಿಸುವವರು ವಸಂತಮಾಸದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆ ಹಾಗೂ ವಸಂತಮಾಸಕ್ಕೆಸಂಬಂಧಿಸಿದಂತೆ ಕವನಗಳನ್ನು ಕಳುಹಿಸಬಹುದಾಗಿದೆ. 18 ರಿಂದ 35 ರ ವಯೋಮಾನದವರು ಈಕವಿಗೋಷ್ಥಿಗೆ ಕವನಗಳನ್ನು ಏಪ್ರಿಲ್ 15 ರೊಳಗಾಗಿ ನಿಲಯ ನಿರ್ದೇಶಕರು, ವಸಂತೋತ್ಸವಯುವಕವಿಗೋಷ್ಠಿ ವಿಭಾಗ, ಆಕಾಶವಾಣಿ, ಜೆ.ಪಿ.ಎಸ್.ಕಾಲೋನಿ ಭದ್ರಾವತಿ 577302 ಗೆಕಳುಹಿಸಬಹುದಾಗಿದ್ದು ಆಯ್ಕೆಯಾದ ಕವನಗಳನ್ನು ಬರೆದ ಕವಿಗಳೆ ಶ್ರೋತೃಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಾಗುವುದು ಹಾಗು ಕವನಗಳನ್ನು ಗಾಯನ ರೂಪದಲ್ಲಿ ಆಕಾಶವಾಣಿಯಕಲಾವಿದರಿಂದ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
