ಆಳರಸರ ಊರಿನ ‘ಪಂಜುಗಾರ’ ಪತ್ರಕರ್ತ ರವಿಬಿದನೂರಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ!
ಪತ್ರಕರ್ತ ರವಿಬಿದನೂರಿಗೆ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘವು ನೀಡುವ 2026 ನೇ ಸಾಲಿನ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ ‘ ಲಭಿಸಿದೆ.
ಉತ್ತರ ಪ್ರದೇಶದ ರಾಜಕಾರಣದಲ್ಲಿ ‘ಜನ್ನಾಯಕ’ (ಜನನಾಯಕ) ಎಂದೇ ಕರೆಯಲ್ಪಟ್ಟ ಕರ್ಪೂರಿ ಠಾಕೂರ್ ಅವರು ಭಾರತದ ಬಹುಜನ ರಾಜಕಾರಣದ ರೂವಾರಿಗಳಲ್ಲಿ ಒಬ್ಬರು. ಹಿಂದುಳಿದ ಹಾಗೂ ಅತಿಹಿಂದುಳಿದ ಜನಜಾತಿಗಳ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಅವರು, ಮೀಸಲಾತಿ ರೂಪಿಸುವಲ್ಲಿ ತಮ್ಮ ಸೈದ್ದಾಂತಿಕ ಧೋರಣೆಯ ಮೂಲಕ ಬಹುಜನರ ಪಾಲಿಗೆ ವರವೂ, ಬಲವೂ ಆಗಿದ್ದಾರೆ.
ಇಂತಹ ಜನನಾಯಕ ಕರ್ಪೂರಿ ಠಾಕೂರ್ ಅವರ ಹೆಸರಿನಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘವು ಪ್ರತಿವರ್ಷ ಸಾಧಕ, ಸಮಾಜಮುಖಿ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವ ಮೂಲಕ ಬಹುಜನ ಹಿತ ಕಾಯುವ ಪರಂಪರೆಯನ್ನು ಮುಂದುವರಿಸಿದೆ.

ರವಿಯ ವೃತ್ತಿಪರತೆಗೆ, ಜನಪರ ಪತ್ರಿಕೋದ್ಯಮಕ್ಕೆ ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅನೇಕ ಸಂಘ-ಸಂಸ್ಥೆಗಳ ಪ್ರಶಸ್ತಿ ಹಾಗೂ ಸಮ್ಮಾನಗಳು ಲಭಿಸಿವೆ. ಆದರೆ ಅವು ಎಂದಿಗೂ ಅಹಂಕಾರವನ್ನು ಅವರೊಳಗೆ ಹುಟ್ಟಿಸಿಲ್ಲ. ನಿಸ್ಪೃಹ ಗೆಳೆತನವೇ ರವಿಯ ಬಂಡವಾಳ.