ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.12
ಕನ್ನಡದ ಪ್ರಸಿದ್ಧ ರಂಗ ನಿರ್ದೇಶಕ, ರಂಗ ಶಿಕ್ಷಕ ಹಾಗೂ ರಂಗ ಚಿಂತಕ ಚಿದಂಬರ ರಾವ್ ಜಂಬೆ (77) ಅವರು ಶನಿವಾರ ಹೆಗ್ಗೋಡಿನಲ್ಲಿ ನಿಧನರಾದರು.
ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಅವರ ನಿಧನದಿಂದ ಕನ್ನಡ ರಂಗಭೂಮಿ, ಅದರಲ್ಲೂ ಹೆಗ್ಗೋಡು–ನೀನಾಸಮ್ನ ಸಾಂಸ್ಕೃತಿಕ ವಲಯದಲ್ಲಿ ಹಿರಿಯ ರಂಗ ಗುರುವೊಬ್ಬರನ್ನು ಕಳೆದುಕೊಂಡಂತಾಗಿದೆ.
