ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಎಂ. ಶ್ರೀಕಾಂತ್ ನೇಮಕ
ಶಿವಮೊಗ್ಗ ಕೇಂದ್ರ ಶಾಸಕರ ಬ್ಯಾಂಕ್ ( ಎಸ್ ಡಿ ಡಿ ಸಿ ಬ್ಯಾಂಕ್) ನ ಆಡಳಿತಮಂಡಳಿಯ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಸಹಕಾರಿ ಧುರೀಣ ಎಂ. ಶ್ರೀಕಾಂತ್ ಅವರು ನಾಮನಿರ್ದೇಶನ ಗೊಂಡಿದ್ದಾರೆ.
ಈ ಹಿಂದೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ನೇಮಕ ಹೊಂದಿದ್ದ ಎಲ್.ಜಗದೀಶ್ ಅವರ ನಾಮನಿರ್ದೇಶನವನ್ನು ಹಿಂಪಡೆದಿರುವ ರಾಜ್ಯ ಅಪೆಕ್ಸ್ ಬ್ಯಾಂಕ್ ತೆರವಾದ ಜಾಗಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಂ. ಶ್ರೀಕಾಂತ್ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಇಂದು ಡಿಸಿಸಿ ಬ್ಯಾಂಕ್ ಗೆ ಆಗಮಿಸಿದ ಎಂ. ಶ್ರೀಕಾಂತ್ ಅವರನ್ನು ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್ ಸ್ವಾಗತಿಸಿ ಅಭಿನಂದಿಸಿದರು.
