ಶಿವಮೊಗ್ಗ, ಮೇ.1: ಅಹಿಂಸೆ, ಕರುಣೆ ಸೌಹಾರ್ದತೆ ನ್ಯಾಯ ನೀತಿ ಸತ್ಯ ಪ್ರತಿಪಾದಿಸಿದ ಬುದ್ಧ ನೈತಿಕತೆ ಬಿತ್ತಿದ ಮಹಾತ್ಮ ಬುದ್ಧ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ ಶರತ್ ಅನಂತ್ ಮೂರ್ತಿ ಅವರು ಅಭಿಪ್ರಾಯಪಟ್ಟರು.
ಅವರು ಕುವೆಂಪು ವಿಶ್ವವಿದ್ಯಾಲಯದ ಡಾ ಅಂಬೇಡ್ಕರ್ ಅಧ್ಯಯನ ಕೇಂದ್ರವು ಏರ್ಪಡಿಸಿದ್ದ ಬುದ್ಧಜಯಂತಿ ಕಾರ್ಯಕ್ರಮದಲ್ಲಿ ಮಾಲಾರ್ಪಣೆ ಮಾಡಿ ಮಾತನಾಡಿದರು.
ಗಮನಿಸಿ:ಬುದ್ದ ಶೋಷಣೆಯನ್ನು ಒಪ್ಪಲಿಲ್ಲ: ಚಂದ್ರಶೇಖರ ಎನ್
ಭಾರತ ಬೌದ್ಧರು ಕಡೆ ಸಾಗಿದ್ದರೆ, ಇಷ್ಟೊಂದು ಸಮಸ್ಯೆಗಳು ಇರುತ್ತಿರಲಿಲ್ಲ. ಶಾಂತಿಯ ಪ್ರತಿಪಾದಕ ಗೌತಮ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ ತಿಮ್ಮರಾಯಪ್ಪ ಮಾತಾಡಿ, ಬದುಕಿನ ಜ್ಞಾನವನ್ನು ಧಾರೆ ಎರೆದ ಬುದ್ಧ ಜಗತ್ತಿಗೆಶಾಂತಿ ನೆಮ್ಮದಿ ತೋರಿದ ದಾರ್ಶನಿಕ ಎಂದರು.
ಡಾ ನಿರಂಜನ, ಡಾ ದೇವಿದಾಸ, ಡಾ ಮಂಜುನಾಥ, ಓಬಳೇಶ್ ರವಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
