ಶಿವಮೊಗ್ಗ ,ಏ.9: ಇತ್ತೀಚಿಗೆ ನಗರದ ವಾರ್ಡ್ ನಂ.7 ರ ಆದರ್ಶ ಕಾಲೋನಿಯಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮಿ ಮತ್ತು ಯುವ ಮುಖಂಡ ಕೆ.ಈ. ಕಾಂತೇಶ್ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಗಮನಿಸಿ:ದೇಶಕ್ಕೆ ಸೇವೆ ಸಲ್ಲಿಸುವ ಅಸಂಘಟಿತ ಕಾರ್ಮಿಕರಿಗೆ ಮೊದಲ ಸ್ಥಾನ ನೀಡಬೇಕು: ಬಿವೈಆರ್
ಸ್ಥಳದಲ್ಲಿ ಹಾಜರಿದ್ದ ಆದರ್ಶ ಕಾಲೋನಿಯ ಮಳೆ ಹಾನಿಗೊಳಗಾದ ನಿವಾಸಿಗಳ ಸಮಸ್ಯೆಗಳನ್ನು ವಿಚಾರಿಸಿದರು. ಇಲ್ಲಿ ರಾಜಕಾಲುವೆ ಮತ್ತು 3 ಚರಂಡಿಗಳು ಸಂಪೂರ್ಣ ಮಳೆ ನೀರಿನಿಂದ ಉಕ್ಕಿ ಹರಿದು, ಸುಮಾರು 25-30 ಮನೆಗಳ ಒಳಗೆ 5 ರಿಂದ 6 ಅಡಿ ಮಳೆ ನೀರು ನುಗ್ಗಿ ಹಾನಿಗೊಳಗಾದ ಬಗ್ಗೆ ವಿಚಾರಿಸಿ ತಿಳಿದುಕೊಂಡರು.
ಆದರ್ಶ ಕಾಲೋನಿ ನಿವಾಸಿಗಳಿಗೆ ಪ್ರತಿ ವರ್ಷ ಅತಿಯಾದ ಮಳೆಯಿಂದ ಹಾನಿ ಸಂಭಂವಿಸುತ್ತಿತ್ತು, ಕೂಡಲೇ ಆದರ್ಶ ಕಾಲೋನಿಯ 2 ಡೆತ್ ಸ್ಟ್ರಾಬ್ ಗಳನ್ನ ಕನಿಷ್ಠ 2 1/2 ಅಡಿ ಎತ್ತರಕ್ಕೆ ಏರಿಸಿ ಸಮಸ್ಯೆಯನ್ನು ಬಗೆಹರಿಸಲು ಕಾಂತೇಶ್ ರವರು ಸ್ಥಳಕ್ಕೆ ಆಗಮಿಸಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮಿ ಅವರನ್ನು ಕೋರಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಕಲ್ಲೂರು ಮೇಘರಾಜ, ಕೆ ನಾಗರಾಜ, ಶ್ರೀಮತಿ ಜಯಮ್ಮ, ಶ್ರೀಮತಿ ಲತಾ, ಶ್ರೀಮತಿ ರಶ್ಮಿ, ಪೂವಯ್ಯ ಮುಂತಾದವರು ಹಾಜರಿದ್ದರು.
