ಶಿವಮೊಗ್ಗ ,ಏ.14: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಂದು ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಗಮನಿಸಿ:ಮಹಿಳಾ ಮೀಸಲಾತಿಯಲ್ಲೂ ಒಳಮೀಸಲು ಕಲ್ಪಿಸಬೇಕು: ಎಂಎಲ್ಸಿ ಕೆ.ಶಿವಕುಮಾರ್
ಸಂಘದ ಜಿಲ್ಲಾಧ್ಯಕ್ಷ ಯು.ಹೆಚ್. ವೈದ್ಯನಾಥ್, ಉಪಾಧ್ಯಕ್ಷ ದೇಶಾದ್ರಿ ಹೊಸ್ಮನೆ ಹಾಗೂ ಕಾರ್ಯದರ್ಶಿ ದೀಪಕ್ ಸಾಗರ್ ಅಂಬೇಡ್ಕರ್ ಜೀವನಾದರ್ಶದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಖಜಾಂಚಿ ಎಸ್.ಆರ್.ರೋಹಿತ್, ಹಿರಿಯ ಉಪಾಧ್ಯಕ್ಷ ಹುಚ್ರಾಯಪ್ಪ, ವಿಶೇಷ ಅತಿಥಿಗಳಾಗಿ ಕಂದಾಯ ಅಧಿಕಾರಿ ಹೊತ್ತಾರೆ ಶಿವಕುಮಾರ್, ಎಸ್.ಆರ್.ರಂಜಿತ್, ಭರತ್ರಾಜ್ ಸಿಂಗ್, ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ನಾಗರಾಜ್ ಶೆಣೈ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
