ಬೆಂಗಳೂರು,ಜು.8: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ಗೆ ಸಿನಿಮಾ ಚಿತ್ರೀಕರಣಕ್ಕಾಗಿ ಥೈಲ್ಯಾಂಡ್ಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿಯಲ್ಲಿ ೬ ತಿಂಗಳ ಕಾಲ ಸೆರವಾಸ ಅನುಭವಿಸಿದ ನಟ ದರ್ಶನ್ ಗೆ ಜಾಮೀನು ದೊರಕಿದ ಮೇಲೆ ಬೆಂಗಳೂರು ಬಿಟ್ಟು ಬೇರೆಲ್ಲೂ ಹೋಗದಂತೆ ಕೋರ್ಟ್ ಆದೇಶ ನೀಡಿತ್ತು. ನಂತರ ಡೆವಿಲ್ ಸಿನಿಮಾ ಚಿತ್ರೀಕರಣ ಸಂಬಂಧಿಸಿದಂತೆ ವಿದೇಶದಲ್ಲಿ ಶೂಟಿಂಗ್ಗಾಗಿ ಕೋರ್ಟ್ ಮನವಿ ಸಲ್ಲಿಸಿದ್ದು, ಈಗ 57 ನೇ ಸೆಷನ್ಸ್ ಕೋರ್ಟ್ ಜು.11ರಿಂದ 30 ರವೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ.
