Homeಜಿಲ್ಲೆಪ್ರಾಧಿಕಾರಗಳ ಅಧ್ಯಕ್ಷಾವಧಿ ವಿಸ್ತರಿಸಿದ ಸರ್ಕಾರ- ಅವಕಾಶ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ನಿರಾಶೆ -ಸೂಡಾ ಅಧ್ಯಕ್ಷರಾಗಿ ಸುಂದರೇಶ್ -ಕಾಡಾ...

ಪ್ರಾಧಿಕಾರಗಳ ಅಧ್ಯಕ್ಷಾವಧಿ ವಿಸ್ತರಿಸಿದ ಸರ್ಕಾರ- ಅವಕಾಶ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ನಿರಾಶೆ -ಸೂಡಾ ಅಧ್ಯಕ್ಷರಾಗಿ ಸುಂದರೇಶ್ -ಕಾಡಾ ಅಧ್ಯಕ್ಷರಾಗಿ ಅಂಶುಮಂತ್ ಗೌಡ ಮುಂದುವರಿಕೆ

Spread the love

ಪ್ರಾಧಿಕಾರಗಳ ಅಧ್ಯಕ್ಷಾವಧಿ ವಿಸ್ತರಿಸಿದ ಸರ್ಕಾರ- ಅವಕಾಶ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ನಿರಾಶೆ
ಸೂಡಾ ಅಧ್ಯಕ್ಷರಾಗಿ ಸುಂದರೇಶ್ -ಕಾಡಾ ಅಧ್ಯಕ್ಷರಾಗಿ ಅಂಶುಮಂತ್ ಗೌಡ ಮುಂದುವರಿಕೆ

ಬೆಂಗಳೂರು: ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಸೇರಿದಂತೆ ರಾಜ್ಯದ ವಿವಿಧ ಹತ್ತು ಪ್ರಾಧಿಕಾರಗಳ ಅಧ್ಯಕ್ಷರ ಅವಧಿಯನ್ನು ಮುಂದುವರೆಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರಾ(ಕಾಡಾ) ಅಧ್ಯಕ್ಷರಾಗಿರುವ ಡಾ. ಅಂಶುಮಂತ್ ಗೌಡ ಅವರ ಅವಧಿಯನ್ನು ವಿಸ್ತರಿಸಲಾಗಿದೆ.
ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳ ಅವಧಿಗೆ ನೇಮಕ ಮಾಡಿದ್ದ ಅಧ್ಯಕ್ಷರ ಅವಧಿಯು ಫೆ. 28 ಕ್ಕೆ ಕೊನೆಗೊಳ್ಳಲಿದ್ದು, ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರ , ಕಾಡಾ ಸೇರಿದಂತೆ ಹತ್ತು ಪ್ರಾಧಿಕಾರಗಳ ಅಧ್ಯಕ್ಷರ ಅವಧಿಯನ್ನು ವಿಸ್ತರಿಸುವಂತೆ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಫೆ. 26 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಅದರಂತೆ ಮೈಸೂರು, ಶಿವಮೊಗ್ಗ. ಬಳ್ಳಾರಿ, ಹುಬ್ಬಳಿ-ಧಾರವಾಡ, ಮಂಗಳೂರು, ಬೀದರ್, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮತ್ತು ಕರ್ನಾಟಕ ದ್ರಾಕ್ಷಾರಸ ಮಂಡಳಿ ಯ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ ಹೊರಡಿಸಿದೆ.

ಅಸಮಾಧಾನ:

ಅವಧಿ ಪೂರ್ಣಗೊಂಡ ವಿವಿಧ ಪ್ರಾಧಿಕಾರಗಳ ಅಧ್ಯಕ್ಷರನ್ನೆ ಮುಂದುವರೆಸಿರುವ ಪಕ್ಷದ ನಿರ್ಧಾರ ಮತ್ತು ಸರ್ಕಾರದ ಧೋರಣೆಗೆ ಕಾಂಗ್ರೆಸ್ ವಲಯದಲ್ಲೇ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
ಫೆ. 28(ಇಂದು) ಪ್ರಾಧಿಕಾರಗಳ ಅಧ್ಯಕ್ಷರ ಅವಧಿ ಪೂರ್ಣಗೊಳ್ಳಲಿರುವುದರಿಂದ ಮುಂದಿನ ಅವಧಿಗೆ ಅಧ್ಯಕ್ಷರಾಗುವ , ಪದಾಧಿಕಾರಿಗಳ ಸ್ಥಾನಕ್ಕೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಸರ್ಕಾರದ ನಿರ್ಧಾರದಿಂದ ನಿರಾಶೆಯಾಗಿದೆ.
ಪಕ್ಷದ ಅಧಿಕಾರಕ್ಕೆ ಬಂದು ಬಹಳ ತಡವಾಗಿ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಮಾಡಲಾಗಿದ್ದು, ಮುಂದಿನ ಎರಡು ವರೆ ವರ್ಷಗಳಲ್ಲಾದರೂ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ಇಲ್ಲದಂತಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments