ಶಿವಮೊಗ್ಗ, ಮೇ.6: ಕುವೆಂಪು ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವದಲ್ಲಿ ಪರಿಸರ ವಿಜ್ಞಾನ ವಿಭಾಗದಲ್ಲಿ ಕುಂದಾಪುರ ಮೂಲದ ರಕ್ಷಾ 7 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.
ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಸ್ವರ್ಣ ಪದಕ ಪಡೆಯುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಅದರೆ ನನ್ನ ಶ್ರಮ ಪ್ರತಿಫಲದ ಸಿಕ್ಕಿದೆ ಅದು ಸಂತಸ ತಂದಿದೆ.
ಗಮನಿಸಿ: ಸ್ವರ್ಣ ಪದಕ ಬುದ್ದ, ಬಸವ, ಅಂಬೇಡ್ಕರ್ ಗೆ ಅರ್ಪಣೆ
ಪರಿಸರ ವಿಜ್ಞಾನ ನನಗೆ ಇಷ್ಟದ ವಿಷಯವಾಗಿದ್ದು, ಚಿಕ್ಕ ವಯಸ್ಸಿನಿಂಧಲೇ ಪರಿಸರದ ಬಗ್ಗೆ ಆಸಕ್ತಿ ಇತ್ತು. ಹಾಗಾಗಿ ಈ ಕೋರ್ಸ್ ತೆಗೆದುಕೊಂಡೆ. ನಾನು ಈ ಸಾಧನೆ ಮಾಡಲು ವಿಭಾಗದ ಎಲ್ಲ ಪ್ರಾಧ್ಯಾಪಕರು ಸಹಾಯ ಮಾಡಿದ್ದಾರೆ. ಪ್ಲಾಂಟ್ ಎಕಾಲಜಿಕಲ್ ಬಗ್ಗೆ ಆಸಕ್ತಿ ಇದೆ ಎಂದರು.
