Homeರಾಜಕೀಯಹೆಚ್ ಡಿ ಡಿ. -ಬಿಸ್ವೈ ಆರ್ಶಿವಾದ ಪಡೆದ ಡಿಕೆಶಿ- ರಾಜಕೀಯ ವೈರತ್ವಗಳ ಆಚೆಗೂ ಸೌಹಾರ್ದ ರಾಜಕಾರಣ

ಹೆಚ್ ಡಿ ಡಿ. -ಬಿಸ್ವೈ ಆರ್ಶಿವಾದ ಪಡೆದ ಡಿಕೆಶಿ- ರಾಜಕೀಯ ವೈರತ್ವಗಳ ಆಚೆಗೂ ಸೌಹಾರ್ದ ರಾಜಕಾರಣ

Spread the love

ಹೆಚ್ ಡಿ ಡಿ. -ಬಿಸ್ವೈ ಆರ್ಶಿವಾದ ಪಡೆದ ಡಿಕೆಶಿ
ರಾಜಕೀಯ ವೈರತ್ವಗಳ ಆಚೆಗೂ ಸೌಹಾರ್ದ ರಾಜಕಾರಣ

ಬೆಂಗಳೂರು: ಪಕ್ಷ ರಾಜಕಾರಣದ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿದ ಡಿ ಕೆ ಶಿವಕುಮಾರ್ ಇಂದು ಮಾಜಿ ಮುಖ್ಯಮಂತ್ರಿ ಬಿಜೆಪಿಯ ಬಿ. ಎಸ್ ಯಡಿಯೂರಪ್ಪ ಮತ್ತು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಿ
ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಮಾರಂಭಕ್ಕೆ ಆಹ್ವಾನ ನೀಡಿದರು.

ಇಂದು ಸಂಜೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಡಿ ಕೆ ಶಿವಕುಮಾರ್ ಅವರು ಇಂದು ಮದ್ಯಾಹ್ನ ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರನ್ನು ಭೇಟಿ ಆರ್ಶಿವಾದ ಪಡೆದರು. ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ತೆರಳಿದ ಡಿ ಕೆ ಶಿವಕುಮಾರ್ ಅವರು ದೇವೇಗೌಡರ ಕಾಲಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರೆ, ದೇವೇಗೌಡರು ಶಾಲು ಹೊದಿಸಿ ನೂತನ ಮುಖ್ಯಮಂತ್ರಿಗೆ ಆರ್ಶಿವಾದ ಮಾಡಿದರು.

ಇದಕ್ಕೂ ಮೊದಲು ಡಿ ಕೆ ಶಿವಕುಮಾರ್ ಬೆಳಗ್ಗೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ನಂತರ ಬಿಜೆಪಿ ಹಿರಿಯ ನಾಯಕ , ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಡಾಲರ್ ಕಾಲೋನಿ ನಿವಾಸಕ್ಕೆ ತೆರಳಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದರು.
ಯಡಿಯೂರಪ್ಪ ಅವರು ಶಾಲುಹೊದಿಸಿ ,ಪುಷ್ಪಗುಚ್ಚ ನೀಡಿ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments