Homeಜಿಲ್ಲೆಭವನ ನಿರ್ಮಾಣ ಜಾಗ ಪೊಲೀಸ್-ಶಿಕ್ಷಣ ಇಲಾಖೆಯಿಂದ ಒತ್ತುವರಿ

ಭವನ ನಿರ್ಮಾಣ ಜಾಗ ಪೊಲೀಸ್-ಶಿಕ್ಷಣ ಇಲಾಖೆಯಿಂದ ಒತ್ತುವರಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.10

ಮಾದಿಗ ಸಮಾಜದ ಶ್ರೀ ಜಾಂಭವ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಜಾಗವನ್ನು ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಒತ್ತುವರಿ ಮಾಡಿದ್ದು, ಕೂಡಲೇ ಈ ಒತ್ತುವರಿಯನ್ನು ತೆರೆವುಗೊಳಿಸಿ ಸಮಾಜ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಬೇಕೆಂದು ಕರ್ನಾಟಕ ಮಾದಗ ಮಹಾಸಭಾ ಜಿಲ್ಲಾ ಶಾಖೆಯ ಮುಖಂಡರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಶಿವಮೊಗ್ಗ ನಗರದ ಮಿಳಘಟ್ಟದಲ್ಲಿ ಜಿಲ್ಲಾ ಮಾದಿಗ ಸಮಾಜಕ್ಕೆ ಶ್ರೀ ಜಾಂಭವ ಭವನ ನಿರ್ಮಾಣ ಮಾಡಲು ಗ್ರಾಮದ ಸರ್ವೇ ನಂ 3 ರಲ್ಲಿ 39 ಗುಂಟೆ ಖಾಲಿ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು. ಇದರಲ್ಲಿ 9 ಗುಂಟೆ ಪ್ರದೇಶವನ್ನು ಪೊಲೀಸ್ ಇಲಾಖೆಗೂ ಮಂಜೂರು ಮಾಡಲಾಗಿತ್ತು.

ಗಮನಿಸಿ: ಮೋದಿ ಪ್ರಚಾರಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ- ‘ಎಕ್ಸ್’ ನಲ್ಲಿ ಪೋಸ್ಟ್!?

ಮಾದಿಗ ಸಮಾಜಕ್ಕೆ ಮಂಜೂರಾಗಿದ್ದ ನಿವೇಶನದಲ್ಲಿ ಜಾಂಭವ ಭವನ ನಿರ್ಮಾಣ ಮಾಡಲು ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿತ್ತು. ಅದರಂತೆ 2023 ನೇ ಸಾಲಿನಲ್ಲಿ ಇಲಾಖೆಯಿಂದ ಜಾಗವನ್ನು ಹದ್ದುಬಸ್ತು ಮಾಡಿಸಲಾಗಿದ್ದು, ಈ ಸಂದರ್ಭದಲ್ಲಿ ಸರ್ವೇ ಇಲಾಖೆಯಿಂದ ಅಳತೆ ಮಾಡಿ ನಕ್ಷೆ ತಯಾರಿಸಿ ಕೊಡಲಾಗಿತ್ತು. ಆದರೆ ಈಗ ಹಾಲಿ ಜಾಗವನ್ನು ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ಒತ್ತುವರಿ ಮಾಡಿದೆ.

ಮಾದಿಗ ಸಮಾಜಕ್ಕೆ ಈ ಜಾಗ ಬಿಟ್ಟರೆ ಜಿಲ್ಲೆಯಲ್ಲಿ ಯಾವುದೇ ಜಾಗ ಇಲ್ಲ. ಆದರಿಂದ ಕೂಡಲೇ ಸ್ಥಳ ಪರಿಶೀಲಿಸಿ ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಿ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸಮಾಜ ಜಿಲ್ಲಾಧ್ಯಕ್ಷ ಹೆಚ್.ಶಿವಾಜಿ, ಪ್ರಧಾನ ಕಾರ್ಯದರ್ಶಿ ತೇಜೇಶ್ ಸೇರಿದಂತೆ ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments