ಶಿವಮೊಗ್ಗ,ಸೆ.27: ಜಾತಿ ಸಮೀಕ್ಷೆಯ ಶಿವಮೊಗ್ಗ ಜಿಲ್ಲೆ ಎಲ್ಲಾ ತಾಲ್ಲೂಕಿನ ನಡೆಯುತ್ತಿದೆ. ಈ ವರೆಗೆ 25000 ಕ್ಕೂ ಮನೆ ಸರ್ವೆ ಪೂರ್ಣ ಆಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಶನಿವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಗಣತಿ ಸರ್ವೆಗೆ ಈಗ 40,000 ಮನೆಗಳನ್ನು ಕಪ್ಲಿಂಟ್ ಮಾಡಬೇಕು ಎಂದು ಶಿಕ್ಷಕರಿಗೆ ಗುರಿ ನೀಡಲಾಗಿದೆ. ಇನ್ನೂ 10 ದಿನಗಳಲ್ಲಿ ಸಂಪೂರ್ಣವಾಗಿ ಮುಗಿಸಲಾಗುತ್ತದೆ ಎಂದರು.
ಶಿಕ್ಷಕರಿಗೆ ಆಪ್ ಯಿಂದ ಸಮಸ್ಯೆ ಆಗಿತ್ತು. ಅದನ್ನು ಬಗೆ ಹರಿಸಲಾಗಿದೆ. ಈಗ ದಿನಕ್ಕೆ 10 ಮನೆಗಳ ಟಾರ್ಗೆಟ್ ಕೊಟ್ಟಿದ್ದೇವೆ. ಮಲೆನಾಡಿನ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆಯಿದೆ. ಈಗಾಗಲೇ 120 ಶ್ಯಾಡೊ ಏರಿಯಾ ಗುರುತಿಸಲಾಗಿದೆ. ಯಾರು ಕೂಡ ಸಮೀಕ್ಷೆಯಿಂದ ಹೊರಗುಳಿಯದಂತೆ ಮಾಡಲಾಗುತ್ತದೆ. ಸರ್ವೆಗೆ 15 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನ ಬಳಸಲಾಗುತ್ತಿದೆ ಎಂದರು.
