Homeಜಿಲ್ಲೆಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆಗೆ ಮೆಡಿಕಲ್ ಐಕಾನ್ಸ್ ಅಗ್ರಹ

ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆಗೆ ಮೆಡಿಕಲ್ ಐಕಾನ್ಸ್ ಅಗ್ರಹ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.25

ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡ ಬೇಕು ಎಂದು ಆಗ್ರಹಿಸಿ ಮೆಡಿಕಲ್ ಐಕಾನ್ಸ್ ಸಾಮಾಜಿಕ ಸ್ವಯಂ ಸೇವಾ ತಂಡದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಧ್ಯ ಕರ್ನಾಟಕ ಭಾಗದ ಜನರಿಗೆ ನ್ಯಾಯಾಂಗ ಸೇವೆಗಳು ಸುಲಭವಾಗಿ ದೊರಕುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಮನವಿದಾರರು ತಿಳಿಸಿದರು.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಸೇರಿದಂತೆ ಮಧ್ಯಕರ್ನಾಟಕ ಭಾಗದ ನಾಗರೀಕರು ಹೈಕೋರ್ಟ್ ಸಂಬಂಧಿತ ಪ್ರಕರಣಗಳು ಮೇಲ್ಮನವಿ ಅರ್ಜಿಗಳು, ಕಾನೂನು ವ್ಯವಹಾರಗಳು, ಹಾಗೂ ಇತರೆ ನ್ಯಾಯಾಂಗ ವಿಚಾರಗಳಿಗಾಗಿ ದೂರದ ಮಂಗಳೂರಿಗೆ ಅಥವಾ ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ಆರ್ಥಿಕ, ಸಮಯ ಹಾಗೂ ದೂರದ ಪ್ರಯಾಣದ ತೊಂದರೆಗಳು ಹೆಚ್ಚಾಗುತ್ತಿದೆ ಎಂದು ಮನವಿದಾರರು ತಿಳಿಸಿದರು.

ಗಮನಿಸಿ: ತೀರ್ಥಹಳ್ಳಿಯ ಸಹಕಾರ ಸಂಘಗಳಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ: ಕಾನೀನ ಕಡಿದಾಳ

ಮಧ್ಯ ಕರ್ನಾಟಕದ ಶಿವಮೊಗ್ಗ ಭಾಗವು ಶಿಕ್ಷಣ, ಆರೋಗ್ಯ, ವ್ಯಾಪಾರ ಹಾಗೂ ಆಡಳಿತಾತ್ಮಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಇಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾದರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಈಗಾಗಲೆ ರಾಜ್ಯದ ಇತರೆ ಭಾಗಗಳಿಗೆ ನೀಡಿರುವಂತೆ ಶಿವಮೊಗ್ಗಕ್ಕೂ ನ್ಯಾಯಯುತ ಆದ್ಯತೆ ನೀಡಬೇಕಾಗಿದೆ ಆದುದ್ದರಿಂದ ಶಿವಮೊಗ್ಗ ಜಿಲ್ಲೆಯ ಹಾಗೂ ಮಧ್ಯ ಕರ್ನಾಟಕ ಭಾಗದ ಜನರ ಹಿತ ದೃಷ್ಠಿಯಿಂದ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು ಮನವಿದಾರರು ಕೋರ್ಟ್ ಹಿಂಭಾಗದಲ್ಲಿ ಹಲವು ದಿನಗಳಿಂದ ವಕೀಲರು ನೆಡೆಸುತ್ತಿರುವ ಹೋರಾಟ ಸ್ಥಳಕ್ಕೆ ತೆರಳಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ಮೆಡಿಕಲ್ ಐಕಾನ್ಸ್ ನ ಸಾಮಾಜಿಕ ಸ್ವಯಂ ಸೇವಾ ತಂಡದ ಗೌರವ ಅಧ್ಯಕ್ಷ ಹೇಮರಾಜ್ ಜಿ ಎಚ್ ,ಅಧ್ಯಕ್ಷ ಮಂಜುನಾಥ್ ಎಂಎಲ್, ಉಪಾಧ್ಯಕ್ಷ ಜಯರಾಜ್, ಸತೀಶ್ ಸಂಘಟನಾ ಕಾರ್ಯದರ್ಶಿ ಗುರುರಾಜ್ .ಎಲ್ ಪದಾಧಿಕಾರಿಗಳಾದ ಸತೀಶ್, ಗಿರೀಶ್ ಮಸರೂರು, ಮಂಜುನಾಥ್ ಬಿ, ಮಧು ಕೆ.ಜಿ.ಅಶೋಕ್, ಶಫಿ ,ಭವಾನಿ ರಾಜ್ ಸಿಂಧ್ಯ, ಉಮೇಶ್, ರಘು ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments