ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.14
ತುಂಗಾ ಸೇತುವೆ ಹೊಸ ಸೇತುವೆ ನಿರ್ಮಾಣವಾಗಬೇಕೇಂಬ ನಗರದ ಜನರ ಬಹುದಿನ ಬೇಡಿಕೆ ಈಗ ಈಡೇರಿದ್ದು, ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಕಾಮಗಾರಿ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ .
ಈ ಸಂಬಂಧಪಟ್ಟಂತೆ ಶಾಸಕ ಎಸ್ ಎನ್ ಚನ್ನಬಸಪ್ಪ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಭೇಟಿ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮನವಿ ಮಾಡಿದ್ದರು. ಅದರಂತೆ ಶಾಸಕರು ಪರಿಶ್ರಮ ಫಲಿಸಿದೆ.
ಗಮನಿಸಿ: ಹುಲಿಕಲ್ ಘಾಟ್ ಕಾಮಗಾರಿ ಇಲಾಖೆಗೆ ಸವಾಲಾಗಿದೆ: ಸತೀಶ್ ಜಾರಕಿಹೊಳಿ
ಈ ಬಗ್ಗೆ ಮಂಗಳವಾರ ಸಚಿವರು ಮಾಧ್ಯಮಗಾರರೊಂದಿಗೆ ಮಾತನಾಡಿ. ಶಿವಮೊಗ್ಗ ನಗರದ ತುಂಗಾ ಹೊಸ ಸೇತುವೆ ನಿರ್ಮಾಣಕ್ಕೆ 50 ಕೋಟಿ ಬಿಡುಗಡೆ ಮಾಡಿದ್ದು, ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಇದರ ಕೆಲಸ ಆರಂಭವಾಗಲಿದೆ.
ನಮ್ಮ ಇಲಾಖೆ ಹಾಗೂ ಸರ್ಕಾರ ರಾಜ್ಯದ ಅಭಿವೃದ್ದಿಗಾಗಿ ಸದಾ ಸಿದ್ದವಿರುತ್ತದೆ ಎಂದರು.
